Thursday, July 21, 2011

ಎಲೆ

ಉದುರಿ ಬಿದ್ದ ಆ ಎಲೆಗೆ
ಮೇಲೇರುವ ಆಸೆ ಇರಲಿಲ್ಲ ,
ಬಿದ್ದ ಎಲೆಯ ಸಪ್ಪಳ ಕೇಳುವ
ಗೋಜು ಯಾರಿಗೂ ಇಲ್ಲ !

ಬಿಸಿಲಿಗೆ ಒಣಗಿ ಬಾಡಿ

ಬಿದ್ದ ಎಲೆ ಆದಾಗಿರಲಿಲ್ಲ,
ಯಾರೋ ಬಲವಂತದಿಂದ
ಕಿತ್ತು ಬಿಸಾಡಿರಬೇಕು !!

ತಾನು ಮಾಡಿರುವ

ತಪ್ಪಾದರೂ ಏನು..?
ಎಂದು ಕಾರಣ ಹುಡುಕುವ
ಆಟ ತಿಳಿಯದ ಎಲೆ ಅದು !

ಆದರೆ ಕೀಳುವ ಮನಸಿಗೆ

ಕಾರಣ ಬೇಕಾಗಿರಲಿಲ್ಲ
ತನ್ನ ಖುಷಿಗೆ, ಬೇರೆಯವರ
ಮನನೋಯಿಸುವ ಮನಸ್ಸಿನಂತೆ !!

1 comment:

  1. Nice poem phani... yestu sundharavagi yeleya manasina bavanegalanu arthagarbithavagi baredhidhira.... thumba chennagidhe... :)

    ReplyDelete

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...