ನನಗೊಂದೆ ಪ್ರಶ್ನೆ
ನಾ ಬರೆಯುವ ಕವಿತೆಗಳ ತುಂಬಾ
ಹಾಳು ಉಪಮೆಗಳ ಕಾಟ!
ಇವು ಆಡುತಿವೆ ಬಿಡದೆ ಹಿಂಬಾಲಿಸಿ
ಕವಿತೆಯೊಳಗೆ ನುಸುಳುವ ಆಟ!!
ಕೂತು ಹೇಳುತಿವೆ, ನಾವಿಲ್ಲದೆ
ನಿನ್ನ ಕವಿತೆಗಳಿಗೆ ಜೀವವಿಲ್ಲ, ಭಾವವಿಲ್ಲ
ಅರ್ಥವಂತು ಮೊದಲೇ ಇಲ್ಲ...!!
ನಾನು ಬಿಟ್ಟ ಕಣ್ಣು ಬಿಟ್ಟಂತೆ,
ಕೇಳಬೇಕಿದೆ ಇವುಗಳ ಮಾತು,
ಯಾಕೆಂದರೆ ಇವುಗಳಿಲ್ಲದೆ
ನನ್ನ ಕವಿತೆಗಳಿಗೆ ಓದಿಸಿಕೊಳ್ಳುವ
ಗತ್ತು ಇಲ್ಲ, ತಾಕತ್ತು ಇಲ್ಲ!!
ನನ್ನಂತ ಬಡಪಾಯಿ, ಆಮಾಯಕನ
ಮೇಲೆ ಇವುಗಳ ದೌರ್ಜನ್ಯ ಸಲ್ಲ!
ನಾನಂತೂ..! ಇದ ಸಹಿಸುವುದು ಇಲ್ಲ!!
ಈಗ ನನಗೊಂದೆ ಪ್ರಶ್ನೆ..
ಬರೆಯಬಹುದಾ ಕವಿತೆಗಳಾ
ಈ ಉಪಮೆಗಳಿಲ್ಲದೆ...?